ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅತ್ಯುನ್ನತ ಗುಣಮಟ್ಟ, ಅತ್ಯಂತ ಆಕರ್ಷಕ ಹಾಗೂ ಅತೀ ಹೆಚ್ಚಿನ ಸಂಗ್ರಹಗಳೊಂದಿಗೆ ಗ್ರಾಹಕರಿಗೆ ಚಿನ್ನಾಭರಣ ನೀಡುತ್ತಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದೀಗ ಚಿತ್ರದುರ್ಗದಲ್ಲಿ ಆರಂಭಗೊಂಡಿದೆ.
ಚಿತ್ರದುರ್ಗ(ಮಾ.18) ಜವಾಬ್ದಾರಿಯುತವಾದ ಆಭರಣ ಸಂಸ್ಥೆಯಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕರ್ನಾಟಕದ ಚಿತ್ರದುರ್ಗದಲ್ಲಿ ತನ್ನ ಹೊಸ ಶೋರೂಂ ಅನ್ನು ಆರಂಭಿಸಿದೆ. ಈ ಹೊಸ ಶೋರೂಂ ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಗ್ರಾಹಕರಿಗೆ ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಆಕರ್ಷಕ ಆಭರಣಗಳ ಸಂಗ್ರಹವು ವಿಭಿನ್ನ ಬಗೆಯ ಮತ್ತು ವೈವಿಧ್ಯಮಯ ವಿನ್ಯಾಸಗಳು ಮತ್ತು ಸ್ಟೈಲ್ ಹೊಂದಿದೆ. ಈ ಹೊಸ ಶೋರೂಂನಲ್ಲಿ ಗ್ರಾಹಕರು ಮಾರ್ಚ್16 ರಿಂದ 23 ರವರೆಗೆ ಪ್ರತಿ ಚಿನ್ನಾಭರಣ ಖರೀದಿ ಮೇಲೆ ಬೆಳ್ಳಿಯ ನಾಣ್ಯವನ್ನು ಉಚಿತವಾಗಿ ಪಡೆಯಲಿದ್ದಾರೆ. ಇದು ಸೀಮಿತ ಅವಧಿಯ ಉಡುಗೊರೆಯಾಗಿದ್ದು, ಈ ಶೋರೂಂ ಆರಂಭವು ಭಾರತದಲ್ಲಿ ಬ್ರ್ಯಾಂಡ್ ವಿಸ್ತರಣೆಯ ಬದ್ಧತೆ ಮತ್ತು ಅಸಾಧಾರಣವಾದ ಕುಶಲತೆ ಹಾಗೂ ಸೇವೆಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ 20 ಶೋರೂಮ್ಗಳನ್ನು ಹೊಂದಿರುವ ಬ್ರ್ಯಾಂಡ್ ಈಗ ಕರ್ನಾಟಕದಲ್ಲಿ 40ನೇ ಶೋರೂಮ್ ತೆರೆಯುತ್ತಿದೆ. ಇದು ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಾ, ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ನವೀಕೃತ ಶೋರೂಂ 16ನೇ ಮಾರ್ಚ್ ಭಾನುವಾರದಂದು ಭಾರತದ ಖ್ಯಾತ ಅಭಿನೇತ್ರಿ ಶ್ರೀನಿಧಿ ಶೆಟ್ಟಿ ಅವರು ಅದ್ಧೂರಿಯಾಗಿ ಉದ್ಘಾಟಿಸಿದರು.
ಈ ಶುಭ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥರಾದ ಫಿಲ್ಸರ್ ಬಾಬು ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಭಾರತ, ಮಧ್ಯಪ್ರಾಚ್ಯ, ಯುಎಸ್ಎ, ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಜಾಗತಿಕವಾಗಿ 13 ದೇಶಗಳಲ್ಲಿ 375ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ವಿಸ್ತಾರವಾದ, ಆಕರ್ಷಕವಾದ ಮತ್ತು ಅತ್ಯುತ್ಕೃಷ್ಟ ಗುಣಮಟ್ಟದ ಚಿನ್ನಾಭರಣಗಳಿಗೆ ಖ್ಯಾತಿಯನ್ನು ಗಳಿಸಿದೆ. ಅದೇ ರೀತಿ ಗ್ರಾಹಕಸ್ನೇಹಿ ಸೇವೆಗಳಿಗೆ ಹೆಸರಾಗಿದೆ. ತನ್ನ ಉಪಸ್ಥಿತಿಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯು ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಇನ್ನೂ 12 ಹೊಸ ಶೋರೂಂಗಳನ್ನು ಆರಂಭಿಸುತ್ತಿದೆ.
ಈ ಮೂಲಕ ಎಲ್ಲಾ ಗ್ರಾಹಕರಿಗೂ ಚಿನ್ನಾಭರಣಗಳು ಲಭ್ಯವಾಗುವಂತೆ ಮಾಡುವ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ. 26 ದೇಶಗಳಾದ್ಯಂತ 25,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬ್ರ್ಯಾಂಡ್, ವಿಶ್ವದಾದ್ಯಂತ 15 ಮಿಲಿಯನ್ಗೂ ಅಧಿಕ
ಗ್ರಾಹಕರಿಗೆ ಸೇವೆಗಳನ್ನು ನೀಡಿದೆ. ಈ ಹೊಸ ಶೋರೂಂನಲ್ಲಿ ಚಿನ್ನ, ವಜ್ರ, ಪ್ಲಾಟಿನಂ ಮತ್ತು ಜೆಮ್ಸ್ಟೋನ್ ಆಭರಣಗಳ ಸಂಗ್ರಹವಿದ್ದು, ವಿಭಿನ್ನ ಬಗೆಯ ಅಭಿರುಚಿ ಮತ್ತು ಸಂದರ್ಭಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ
ವಿನ್ಯಾಸಗಳು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಿದ್ದು, ಎಲ್ಲಾ ಆಧುನಿಕ ಸಮುದಾಯಗಳಿಗೆ ಹೊಂದಿಕೊಳ್ಳುವ ರೀತಿಯ ಆಭರಣಗಳ ಸಂಗ್ರಹವಿದೆ. ಈ ಮೂಲಕ ವೈವಿಧ್ಯಮಯ ಗ್ರಾಹಕರ ಅಭಿರುಚಿಗೆ ತಕ್ಕಂತಹ
ಆಭರಣಗಳನ್ನು ನೀಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್, ಚಿತ್ರದುರ್ಗದಲ್ಲಿ ನಮ್ಮ ಹೊಸ ಶೋರೂಂ ಆರಂಭಿಸುತ್ತಿರುವುದಕ್ಕೆ ನಮಗೆ ಅತ್ಯಂತ ಸಂತಸವಾಗುತ್ತಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ನಲ್ಲಿ ನಾವು ಸಂಕೀರ್ಣತೆ ಮತ್ತು
ಕರಕುಶಲತೆಯನ್ನು ಬಿಂಬಿಸುವ ಆಭರಣಗಳನ್ನು ವಿನ್ಯಾಸಗೊಳಿಸುವಲ್ಲಿ ಹೆಮ್ಮೆಪಡುತ್ತೇವೆ. ಅತ್ಯುತ್ಕೃಷ್ಟ ಗುಣಮಟ್ಟ, ನೈತಿಕ ವ್ಯವಹಾರ ಅಭ್ಯಾಸಗಳು ಮತ್ತು ಗ್ರಾಹಕರ ತೃಪ್ತಿಗೆ ಅಚಲ ಬದ್ಧತೆಯೊಂದಿಗೆ ಚಿತ್ರದುರ್ಗದ ಜನರಿಗೆ ನಮ್ಮ ಅಸಾಧಾರಣ
ಸಂಗ್ರಹಗಳನ್ನು ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಗ್ರಾಹಕರಿಗೆ ಪ್ರೀಮಿಯಂ ಶಾಪಿಂಗ್ ಅನುಭವವನ್ನು ನೀಡುವುದನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ಗ್ರಾಹಕರಿಗೆ ಯಾವುದೇ ಲೋಪ ಇಲ್ಲದ ರೀತಿಯಲ್ಲಿ ಶಾಪಿಂಗ್ ಅನುಭವವನ್ನು ನೀಡುವ ನಿಟ್ಟಿನಲ್ಲಿ ಈ ಶೋರೂಂ ಅನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಸೊಗಸಾದ ಮತ್ತು ಪರಿಪೂರ್ಣವಾದ ಆಭರಣಗಳು ಗ್ರಾಹಕರನ್ನು ಕೈಬೀಸಿ ಕರೆಯುವಂತೆ ಇವೆ.
ಅಲ್ಲದೇ, ಗ್ರಾಹಕರಿಗೆ ಸೂಕ್ತವಾಗುವಂತಹ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಲು ನುರಿತ ತಂಡವು ಅವರಿಗೆ ಮಾರ್ಗದರ್ಶನ ಮಾಡಲಿದೆ. ಈ ಶೋರೂಂ ಆರಂಭದ ಮೂಲಕ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ವಿಶ್ವದ ಅತ್ಯಂತ ಆದ್ಯತೆಯ ಆಭರಣ ವ್ಯಾಪಾರಿಯಾಗುವ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ. ಸಾಂಪ್ರದಾಯಿಕ ಕರಕುಶಲತೆಯನ್ನು ಆಧುನಿಕ ನಾವೀನ್ಯತೆಯೊಂದಿಗೆ ಸಂಯೋಜನೆ ಮಾಡಿ ಸುಸ್ಥಿರತೆ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವಲ್ಲಿ ಸಂಸ್ಥೆಯ ಬದ್ಧತೆಯನ್ನು
ಹೊಂದಿದೆ.