Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • KEA 2025
  • Home
  • Sports
  • Cricket
  • ಛೇ.. ಎಂಥ ದುರಂತ! ಮೆಡಿಕಲ್‌ ಸಹಾಯ ಸಿಗದೆ ರೈಲಿನಲ್ಲೇ ಪ್ರಾಣಬಿಟ್ಟ‌ ಭಾರತೀಯ ಕ್ರಿಕೆಟರ್

ಛೇ.. ಎಂಥ ದುರಂತ! ಮೆಡಿಕಲ್‌ ಸಹಾಯ ಸಿಗದೆ ರೈಲಿನಲ್ಲೇ ಪ್ರಾಣಬಿಟ್ಟ‌ ಭಾರತೀಯ ಕ್ರಿಕೆಟರ್

ಅಂಗಚೇತನ ಕ್ರಿಕೆಟ್ ಆಟಗಾರೊಬ್ಬರು ಚತ್ತೀಸ್‌ಗಢ ಎಕ್ಸ್‌ಪ್ರೆಸ್‌ನಲ್ಲಿ ಹೋಗುವಾಗ ದುರಂತವಾಗಿ ಸಾವನ್ನಪ್ಪಿದ್ದಾರೆ.

Padmashree Bhat | Published : Jun 07 2025, 06:00 AM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
16
Asianet Image
Image Credit : freepic and vikram instagram

ವಿಕ್ರಮ ಸಿಂಗ್ ಎಂಬ ಪಂಜಾಬ್ ಮೂಲದ ವೀಳ್ಯದ 38 ವರ್ಷದ ಕ್ರಿಕೆಟರ್‌, ದೆಹಲಿಯಿಂದ ಗ್ವಾಲಿಯರ್‌ಗೆ ಹೋಗುತ್ತಿದ್ದಾಗ, ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

26
Asianet Image
Image Credit : Getty

ರೈಲ್ವೆ ಹಿಲ್ಪ್ ಲೈನ್‌ಗೆ ಹಲವಾರು ಬಾರಿ ಕರೆ ಮಾಡಲಾದರೂ, ವೈದ್ಯಕೀಯ ತಂಡ ಬಂದೇ ಇಲ್ಲ. ಸಿಂಗ್ ಅವರು ರೈಲು ಹೋಗುತ್ತಿದ್ದಾಗಲೇ ನಿಧನರಾಗಿದ್ದಾರೆ. ಮಥುರಾ ನಿಲ್ದಾಣಕ್ಕೆ ಹೋಗುತ್ತಿರುವಾಗಲೇ ವಿಕ್ರಮ್‌ ಆರೋಗ್ಯ ಹದಗೆಟ್ಟಿದೆ.

Related Articles

Rishabh Pant: ಫೀಲ್ಡ್‌ನಲ್ಲೇ ಹೊಸ ಅವತಾರ ತಾಳಿದ ರಿಷಬ್‌ ಪಂತ್!‌ ಬೆಚ್ಚಿ ಬೆರಗಾದ ಕ್ರಿಕೆಟ್‌ ಪ್ರಿಯರು!
Rishabh Pant: ಫೀಲ್ಡ್‌ನಲ್ಲೇ ಹೊಸ ಅವತಾರ ತಾಳಿದ ರಿಷಬ್‌ ಪಂತ್!‌ ಬೆಚ್ಚಿ ಬೆರಗಾದ ಕ್ರಿಕೆಟ್‌ ಪ್ರಿಯರು!
 ಟಿ20 ಕ್ರಿಕೆಟ್‌ ಲೋಕದಲ್ಲಿ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡ ಶುಭ್‌ಮನ್ ಗಿಲ್
ಟಿ20 ಕ್ರಿಕೆಟ್‌ ಲೋಕದಲ್ಲಿ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡ ಶುಭ್‌ಮನ್ ಗಿಲ್
36
Asianet Image
Image Credit : Google

ಬೆಳಗ್ಗೆ 4.58ಕ್ಕೆ ರೈಲ್ವೆ ಹೆಲ್ಪ್‌ಲೈನ್‌ಗೆ ಫೋನ್‌ ಮಾಡಿದರೂ ಕೂಡ ಯಾರೂ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಎಷ್ಟೇ ಬಾರಿ ಫೋನ್‌ ಮಾಡಿದರೂ ಕೂಡ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

46
Asianet Image
Image Credit : Social Media

ಹಜ್ರತ್ ನಿಜಾಮುದ್ದೀನ್ ನಿಲ್ದಾಣದಿಂದ ಇತ್ತೀಚೆಗೆ ರಾತ್ರಿ ಜಾಮ್‌ನಲ್ಲಿ ಚಲಿಸಿದ ಚತ್ತೀಸ್‌ಘಡ ಎಕ್ಸ್‌ಪ್ರೆಸ್‌ನಲ್ಲಿ ಸಿಂಗ್‌ ಅವರು ಏಕಾಂಗಿಯಾಗಿ ಹೋಗಿದ್ದರು.

56
Asianet Image
Image Credit : Social Media

ಮಥುರಾ ಸ್ಟೇಶನ್‌ ತಲುಪುವ ಮುನ್ನವೇ ಟ್ರೇನ್‌ 1.5 ಗಂಟೆಗಳ ಕಾಲ ತಂಗಿತ್ತು. ಬೆಳಿಗ್ಗೆ 8.10ಕ್ಕೆ ಪ್ಲಾಟ್‌ಫಾರ್ಮ್‌ನಲ್ಲಿತ್ತು. ಎಷ್ಟೇ ಸಹಾಯಕ್ಕೆ ಅಂಗಲಾಚಿದರೂ ಕೂಡ ಯಾರೂ ಬಂದಿರಲಿಲ್ಲ. ನಮ್ಮ ಕಣ್ಣು ಮುಂದೆ ವಿಕ್ರಮ್‌ ಸಾವಾಯ್ತು ಎಂದು ತಂಡದಲ್ಲಿದ್ದವರು ಹೇಳಿದ್ದಾರೆ.

66
Asianet Image
Image Credit : Google

ಮಥುರಾ ನಿಲ್ದಾಣಕ್ಕೆ ಬರುತ್ತಿದ್ದಂತೆ ದೇಹವನ್ನು ರೈಲಿನಿಂದ ಹೊರಗಡೆ ತಂದು, ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ.

ಭಾರತೀಯ ರೈಲ್ವೆಯಲ್ಲಿ ಎಮರ್ಜೆನ್ಸಿ ಇದ್ದಾಗಲೂ ಈ ರೀತಿ ಮಾಡುತ್ತಾರಾ ಎಂದು ಚರ್ಚೆ ಶುರು ಆಗಿದೆ. ಇದು ಕೇವಲ ದುರಂತ ಒಂದೇ ಅಲ್ಲದೆ ಭಾರತೀಯ ರೈಲ್ವೆಯಲ್ಲಿ ಮೆಡಿಕಲ್‌ ಕಂಡೀಶನ್‌ ಹೇಗಿದೆ ಎಂದು ತಿಳಿಸಿಕೊಡುವ ಉದಾಹರಣೆಯೂ ಆಗಿದೆ. ವಿಶೇಷ ಚೇತನ ಸಂಸ್ಥೆಗಳು ಈ ಬಗ್ಗೆ ಪ್ರಶ್ನೆ ಮಾಡುತ್ತಿವೆ.

Padmashree Bhat
About the Author
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More...
ಕ್ರಿಕೆಟ್
ರೈಲು
ಸುದ್ದಿ
ಭಾರತ
 
Recommended Stories
Top Stories