Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ರಿಕ್ಕಿ ರೈ ಕೇಸ್‌ ಟ್ವಿಸ್ಟ್, ಗನ್‌ ಮ್ಯಾನ್ ಮೇಲೆ ಅನುಮಾನ! ಅನುರಾಧಗೆ ರಿಲೀಫ್

ರಿಕ್ಕಿ ರೈ ಕೇಸ್‌ ಟ್ವಿಸ್ಟ್, ಗನ್‌ ಮ್ಯಾನ್ ಮೇಲೆ ಅನುಮಾನ! ಅನುರಾಧಗೆ ರಿಲೀಫ್

ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿ ಅನುರಾಧ ಮುತ್ತಪ್ಪ ರೈಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಪೊಲೀಸರ ತನಿಖೆಯಲ್ಲಿ ಹೊಸ ತಿರುವುಗಳು ಕಂಡುಬಂದಿದ್ದು, ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಗನ್‌ಮ್ಯಾನ್ ವಿಠ್ಠಲ್ ಮೇಲೆ ಪೊಲೀಸರ ಅನುಮಾನ ಹೆಚ್ಚಾಗಿದೆ.

Gowthami K | Updated : Apr 22 2025, 01:48 PM
3 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
17
Asianet Image

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅನುರಾಧ ಮುತ್ತಪ್ಪ ರೈಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಿಕ್ಕಿ ರೈ ಕೊಲೆ ಯತ್ನ ಪ್ರಕರಣದಲ್ಲಿ 2ನೇ ಆರೋಪಿ ಸ್ಥಾನದಲ್ಲಿರುವ ಅನುರಾಧ ವಿದೇಶದಲ್ಲಿದ್ದು, ಅಲ್ಲಿಂದಲೇ ತಮ್ಮ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಅನುರಾಧ ಮುತ್ತಪ್ಪ ರೈಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ. ಪ್ರಕರಣ ರದ್ದು ಕೋರಿ ಅನುರಾಧ ವಕೀಲರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅನುರಾಧ ಅಮೆರಿಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
 

27
Asianet Image

 ತಾಳೆಯಾಗದ ಹೇಳಿಕೆಗಳು!
ಇನ್ನು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಬಿಗ್ ಟ್ಬಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ರಿಕ್ಕಿ ರೈ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಾಗುತ್ತಿದೆ. ಮನೆ ಕೆಲಸದವರು, ಗನ್ ಮ್ಯಾನ್ ಗಳು, ಸೆಕ್ಯುರಿಟಿ, ಮ್ಯಾನೇಜರ್ ರಿಂದ ವಿಭಿನ್ನ ಹೇಳಿಕೆ ಹಿನ್ನೆಲೆ ಈ ಅನುಮಾನ ಮೂಡಿದೆ. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಕ್ಕೂ ವಿಚಾರಣಾಧೀನರ ಹೇಳಿಕೆಗೂ ತಾಳೆಯಾಗದ ಹಿನ್ನೆಲೆ ತಮ್ಮದೇ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.

37
Asianet Image

ಪ್ರೀ ಪ್ಲಾನ್‌ ಆಗಿ ಅಟ್ಯಾಕ್  ಮಾಡಿಸಿಕೊಂಡ್ರಾ ರಿಕ್ಕಿ ರೈ!
ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ಕುತ್ತು ತಂದುಕೊಂಡ್ರಾ ರಿಕ್ಕಿ ರೈ? ರಿಕ್ಕಿ ರೈ ಗನ್ ಮ್ಯಾನ್ ವಿಠ್ಠಲ್ ಮೇಲೆ ಪೊಲೀಸರಿಗೆ ದಟ್ಟ ಅನುಮಾನ? ಸೋಮವಾರ ಇಡೀ ದಿನ ಪೊಲೀಸರು ರಿಕ್ಕಿ ರೈ ಗನ್ ಮ್ಯಾನ್ ಗಳ ವಿಚಾರಣೆ ನಡೆಸಿದ್ದರು. ಡ್ರೈವರ್ ಗುರಿಯಾಗಿಸಿಕೊಂಡು ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ತಾವೇ ಸಂಕಷ್ಟಕ್ಕೆ ಸಿಲುಕಿದ್ರಾ ರಿಕ್ಕಿ ರೈ!? ಎಂಬ ಅನುಮಾನ ಮೂಡಿದೆ. ಪ್ರಕರಣ ಡೈವರ್ಟ್ ಮಾಡಲು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಅನುಮಾನ ದಟ್ಟವಾಗಿದೆ

47
Asianet Image

ಶಸ್ತ್ರಾಸ್ತ್ರ ಪರಿಶೀಲನೆ ವೇಳೆ ಸಿಕ್ಕಿತು ಮಹತ್ವದ ಸುಳಿವು!
ಸಿಮ್ ಇಲ್ಲದ ಮೊಬೈಲ್ ಬಿಸಾಕಿ ಪ್ರಕರಣ ದಿಕ್ಕು ತಪ್ಪಿಸುವ ಯತ್ನ ಮಾಡಿದ್ರಾ? ಸೋಮವಾರ ಇಡೀ ದಿನ ರಿಕ್ಕಿ ರೈ ಮನೆ ಮೂರ್ತಿ ಹುಡುಕಾಟ ನಡೆಸಿರುವ ಪೊಲೀಸರು ಗನ್ ಗಳು ಹಾಗೂ ಬುಲೆಟ್ ಗಳ ಸಂಖ್ಯೆ ಪರಿಶೀಲಿಸಿದ್ದರು. ಭದ್ರತೆಗಾಗಿ ಬಳಸ್ತಿದ್ದ ಗನ್ ಗಳೆಷ್ಟು, ಎಷ್ಟು ಗನ್ ಗಳಿಗೆ ಲೈಸೆನ್ಸ್ ಇದೆ, ಎಷ್ಟು ಬುಲೆಟ್ಸ್ ಇದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವ ವೇಳೆ ಈ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ರಿಕ್ಕಿ ರೈ ಪ್ರಕರಣ: ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧಾ!

57
Asianet Image

ಫೈರ್ ಆದ ಸ್ಥಳದಲ್ಲಿ ಸಿಕ್ಕ ಬುಲೆಟ್ ಹಾಗೂ ರಿಕ್ಕಿ ರೈ ಗನ್ ಮ್ಯಾನ್ ವಿಠ್ಠಲ್ ಬಳಸುತ್ತಿದ್ದ ಗನ್ ಗೂ ಸಾಮ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ ಇದೊಂದು ಫೇಕ್ ಅಟ್ಯಾಕ್ ಎನ್ನುತ್ತಿವೆ ಪೊಲೀಸ್ ಮೂಲಗಳು. ಹೀಗಾಗಿಯೇ ಫೇಕ್ ಅಟ್ಯಾಕ್ ಮಾಡಿಸಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ್ರಾ ಎಂಬ ಅನುಮಾನ ಮೂಡಿದೆ. ಪ್ರಕರಣದ ಸತ್ಯಾನುಸತ್ಯತೆ ಶೀಘ್ರವೇ ಹೊರಬೀಳುವ ಸಾಧ್ಯತೆ ಇದೆ.

ವಿದೇಶದಲ್ಲಿದ್ದ ರಿಕ್ಕಿ ರೈ ಬೆಂಗಳೂರಿಗೆ ಬಂದಿರುವುದು ಹಂತಕರಿಗೆ ತಿಳಿದಿದ್ದೇಗೆ?

67
Asianet Image

ಗನ್‌ ಮ್ಯಾನ್ ಮೇಲೆ ದಟ್ಟವಾಯ್ತು ಅನುಮಾನ!
ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಗನ್ ಮ್ಯಾನ್ ಆಗಿದ್ದ ವಿಠ್ಠಲ್ ಮೇಲೆ ಅನುಮಾನ ದಟ್ಟವಾಗಿದೆ. ಮುತ್ತಪ್ಪ ರೈ ನಿಧನದ ಬಳಿಕ ವಿಠ್ಠಲ್ ಕುಟುಂಬದವರ ಭದ್ರತೆ ನೋಡಿಕೊಳ್ಳುತ್ತಿದ್ದ. ರಿಕ್ಕಿ ರೈ ಫಾರ್ಮ್ ಹೌಸ್ ಮತ್ತು ಮನೆಯ ಭದ್ರತೆ ನೋಡಿಕೊಳ್ತಿದ್ದ. ಅಟ್ಯಾಕ್ ಆಗುವ ಮುನ್ನ ವಿಠ್ಠಲ್ ಜೊತೆ  ರಿಕ್ಕಿರೈ ಪ್ರತ್ಯೇಕ ಮಾತುಕತೆ ನಡೆಸಿದ್ದು, ಇದಾದ ಬಳಿಕ ಮನೆಯಿಂದ ವಿಠ್ಠಲ್ ಹೊರ ಹೋಗಿದ್ದ. ಘಟನೆ ನಡೆದು ರಿಕ್ಕಿ ರೈ ಆಸ್ಪತ್ರೆಗೆ ಸೇರಿದ ಬಳಿಕ ಮನೆಗೆ ವಾಪಸ್ಸ್ ಬಂದಿದ್ದು, ಈ ಎಲ್ಲಾ ದೃಶ್ಯಗಳು ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

77
Asianet Image

ಈ ಹಿನ್ನೆಲೆ ವಿಠ್ಠಲ್ ನನ್ನು  ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಮಡಿಕೇರಿ ಮೂಲದ ವಿಠ್ಠಲ್, ಎರಡು ಶಾರ್ಟ್ ಗನ್ ಲೈಸೆನ್ಸ್ ಹೊಂದಿದ್ದಾನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಇನ್ನು ಪ್ರಕರಣದ ಎ1 ಆರೋಪಿ ರಾಕೇಶ್ ಮಲ್ಲಿ ಬಿಡದಿ ಠಾಣೆಗೆ ಹಾಜರಾಗಿದ್ದಾರೆ. ಪೊಲೀಸರ ನೋಟೀಸ್ ಹಿನ್ನೆಲೆ  ವಕೀಲರ ಜೊತೆ ವಿಚಾರಣೆಗೆ ಹಾಜರ್ ಆಗಿದ್ದು,   ಖುದ್ದು ಎಸ್ಪಿ ಶ್ರೀನಿವಾಸ್ ಗೌಡ   ರಾಕೇಶ್ ಮಲ್ಲಿ ವಿಚಾರಣೆ ಮಾಡಿದ್ದಾರೆ.

Gowthami K
About the Author
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ. Read More...
ರಿಕ್ಕಿ ರೈ
ಕ್ರೈಮ್ ನ್ಯೂಸ್
ಕರ್ನಾಟಕ ಸುದ್ದಿ
 
Recommended Stories
Top Stories