ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಸಲೂನ್​ಗೆ ನುಗ್ಗಿ ಲೇಡಿ ರೌಡಿ ಅಟ್ಟಹಾಸ!

ಲೇಡಿ ಗ್ಯಾಂಗ್ ರೌಡಿಸಂ ಬೆಚ್ಚಿಬೀಳಿಸುವಂತಿದೆ. ಅಬ್ಬಬ್ಬಾ.. ಇವಳ ದರ್ಪ. ಇವಳ ದೌಲತ್ತು ನೋಡಿ.. ಈ ಅಟ್ಟಹಾಸ ನೋಡ್ತಿದ್ರೆ ಇವಳೇನು ಹೆಣ್ಣೋ.. ಹೆಮ್ಮಾರಿಯೋ ಅನ್ನೋ ಅನುಮಾನ ಮೂಡುತ್ತೆ.

Govindaraj S | Updated : May 31 2025, 10:39 AM
Share this Video

ಆತನ ಸಲೂನ್ ಒಂದ್ರಲ್ಲಿ ಕೆಲಸ ಮಾಡ್ತಿದ್ದ. ಆದ್ರೆ ಇತ್ತಿಚೆಗಷ್ಟೇ ಆ ಸಲೂನ್​ನಿಂದ ಹೊರಬಂದು ಸ್ವಂತಃ ಸಲೂನ್ ನಡೆಸ್ತಿದ್ದ.. ಇಷ್ಟಕ್ಕೇ ರೊಚ್ಚಿಗೆದ್ದ ಆ ಲೇಡಿ ಗ್ಯಾಂಗ್.. ಆತನ ಮೇಲೆ ಮೃಗೀಯ ರೀತಿಯಲ್ಲಿ ಎರಗಿದ್ದಾರೆ. ಸಾಲದ್ದಕ್ಕೇ ಆತತನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದೆ. ಲೇಡಿ ಗ್ಯಾಂಗ್ ರೌಡಿಸಂ ಬೆಚ್ಚಿಬೀಳಿಸುವಂತಿದೆ.  ಅಬ್ಬಬ್ಬಾ.. ಇವಳ ದರ್ಪ. ಇವಳ ದೌಲತ್ತು ನೋಡಿ.. ಈ ಅಟ್ಟಹಾಸ ನೋಡ್ತಿದ್ರೆ ಇವಳೇನು ಹೆಣ್ಣೋ.. ಹೆಮ್ಮಾರಿಯೋ ಅನ್ನೋ ಅನುಮಾನ ಮೂಡುತ್ತೆ. ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ರೌಡಿಯಂತೆ ಅಬ್ಬರಿಸಿದ್ದಾಳೆ. ಇದ್ದಕ್ಕಿದ್ದಂತೆ ಸಲೂನ್​ಗೆ ಎಂಟ್ರಿ ಕೊಟ್ಟ ಈ ಲೇಡಿ ಗ್ಯಾಂಗ್ ವ್ಯಕ್ತಿ ಮುಖಕ್ಕೆ ಪಂಚ್ ಮೇಲೆ ಪಂಚ್ ಕೊಟ್ಟಿದೆ.

ಅಷ್ಟೆ ಅಲ್ಲ, ಮಹಿಳೆಯ ಜುಟ್ಟು ಹಿಡಿದು ಹಲ್ಲೆ ಮಾಡಿದೆ. ಕೈಮುಗಿದು ಬೇಡಿಕೊಂಡರು ಬಿಡದೆ ಹಲ್ಲೆ ನಡೆಸಿದ್ದ ಈ ಮೃಗೀಯ ಗ್ಯಾಂಗ್ ಈಗ ಅಂದರ್ ಆಗಿದೆ. ಈ ಅಟ್ಟಹಾಸ ನಡೆದಿದ್ದು ಬೆಂಗಳೂರಿನ ಅಮೃತಹಳ್ಳಿಯ ಭುವನೇಶ್ವರಿ ನಗರದಲ್ಲಿ. ಇದೇ ಏರಿಯಾದ ಸಂಜು ಎಂಬಾತ, ರಾಯಲ್ ಸಲೂನ್ ಮತ್ತು ಸ್ಪಾ ನಡೆಸುತ್ತಿದ್ದ. ನಿನ್ನೆ 8 ಗಂಟೆ ಸುಮಾರಿಗೆ ಸ್ಪಾಗೆ ಎಂಟ್ರಿ ಕೊಟ್ಟ ಕಾವ್ಯ, ಸ್ಮಿತಾ, ಮೊಹಮ್ಮದ್ ಹಾಗೂ ಇನ್ನಿಬ್ಬರು ಸಂಜು ಮೇಲೆ ಮನಸೋ ಇಚ್ಛೆ ಮಾಡಿದ್ದಾರೆ. ನಂತ್ರ ಬ್ಲೂ ಕಲರ್ ಸ್ವಿಫ್ಟ್ ಕಾರ್​ನಲ್ಲಿ ಕಿಡ್ನಾಪ್ ಮಾಡಿಕೊಂಡು ದಾಸರಹಳ್ಳಿ ಕಡೆ ಸುತ್ತಾಡಿಸಿ ಬಿಯರ್ ಬಾಟಲ್, ಡ್ರಾಗರ್, ಮಚ್ಚಿನಿಂದ ಹಲ್ಲೆ ಮಾಡಿದ್ದಾರಂತೆ.

ಸಂಜು ಮೇಲೆ ಹಲ್ಲೆ ಮಾಡಿರೋ ಇದೇ ಸ್ಮಿತಾ ಆ್ಯಂಡ್ ಗ್ಯಾಂಗ್ ಜೊತೆ ಸಂಜು ಕೆಲಸ ಮಾಡ್ತಿದ್ದ. ಸಲೂನ್ ಸ್ಪಾನಲ್ಲಿ ಮ್ಯಾನೇಜರ್ ಆಗಿ ಸುಮಾರು 8 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಕೆಲಸ ಬಿಟ್ಟಿದ್ದ ಸಂಜು ಅಮೃತಹಳ್ಳಿ ಬಳಿ ಸ್ವಂತ ಸ್ಪಾ ಓಪನ್ ಮಾಡಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ಮಿತಾ, ಕಾವ್ಯ ಗ್ಯಾಂಗ್ ನಾಲ್ಕೈದು ಜನರನ್ನ ಕರೆತಂದು ಏಕಾಏಕಿ ಸ್ಪಾ ಒಳಗೆ ‌ನುಗ್ಗಿ ಹಲ್ಲೆ ಮಾಡಿ ಕಿಡ್ನಾಪ್ ಮಾಡಿದ್ದಾರೆ. ಸ್ವಂತ ಸ್ಪಾ ಓಪನ್​ ಮಾಡುವಷ್ಟು ಬೆಳೆದಿದ್ಯಾ ಅಂತಾ ಆವಾಜ್​ ಹಾಕಿದ್ದಾರೆ. ತಕ್ಷಣವೇ ಸಂಜು ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಲೇಡಿ ರೌಡಿ ಗ್ಯಾಂಗ್​ ಪತ್ತೆ ಹಚ್ಚಿ ಪೊಲೀಸರು ಸಂಜುನನ್ನ ರಕ್ಷಣೆ ಮಾಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಸ್ಮಿತಾ, ಕಾವ್ಯ, ಮೊಹಮ್ಮದ್ ಅಂದರ್ ಆಗಿದ್ದಾರೆ.

Related Video