ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ಇಮೇಜ್ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ.
- Home
- News
- State
- Karnataka News Live: ಇಂದು ಸಿಎಂ ಸಿದ್ದು ದಿಲ್ಲಿಗೆ । ಸಂಪುಟಕ್ಕೆ ಮೇಜರ್ ಸರ್ಜರಿ? 8 ರಿಂದ 10 ಸಚಿವರಿಗೆ ಕೊಕ್? -
- FB
- TW
- Linkdin
Follow Us
Karnataka News Live: ಇಂದು ಸಿಎಂ ಸಿದ್ದು ದಿಲ್ಲಿಗೆ । ಸಂಪುಟಕ್ಕೆ ಮೇಜರ್ ಸರ್ಜರಿ? 8 ರಿಂದ 10 ಸಚಿವರಿಗೆ ಕೊಕ್? -
;Resize=(380,220))
ಬೆಂಗಳೂರು (ಜೂ.09): ಸಿಲಿಕಾನ್ ಸಿಟಿ ಬೆಂಗಳೂರು ಸಂಡೇ ಮೂಡ್ನ ಮಧ್ಯೆ, ನೂತನ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ನಗರದ ಪೊಲೀಸ್ ಅಧಿಕಾರಿಗಳನ್ನು ಒಟ್ಟಿಗೆ ಕರೆದು ಸಭೆ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ಡಿಸಿಪಿ ಮಟ್ಟದಿಂದ ಹಿಡಿದು ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳವರೆಗೆ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಮಿಷನರ್ ಮಾಡಿ ಕಠಿಣ ಸಂದೇಶ ರವಾನಿಸಿದ್ದಾರೆ.
ಈ ಸಭೆಯಲ್ಲಿ ಪ್ರಮುಖ ಅಂಶಗಳಾಗಿ ಅಪರಾಧ ಪ್ರಕರಣಗಳ ಸ್ಥಿತಿ, ಸೈಬರ್ ಕ್ರೈಂ ನಿಯಂತ್ರಣ, ಮಾದಕ ವಸ್ತುಗಳ ಜಾಲ ವಿಸ್ಥಾರ, ಮತ್ತು ಇತ್ತೀಚಿನ ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಅವ್ಯವಸ್ಥೆಯ ಬಗ್ಗೆ ವಿಮರ್ಶಾತ್ಮಕ ಚರ್ಚೆ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ. ನೂತನ ಕಮಿಷನರ್ ಸೀಮಂತ್ ಕುಮಾರ್ ಅವರ ಈ ಮೊದಲ ಮ್ಯಾರಥಾನ್ ಮೀಟಿಂಗ್, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಗಿತವಾಗುವ ನಿರೀಕ್ಷೆಯ ಹೊರೆಯನ್ನು ಹೆಚ್ಚಿಸಿದೆ.
ನಗರದಲ್ಲಿ ರೌಡಿ ಪ್ರಕರಣ, ಗ್ಯಾಂಬ್ಲಿಂಗ್, ಮಟ್ಕಾ, ಬೆಟ್ಟಿಂಗ್ ಕಂಟ್ರೋಲ್ ಮಾಡಬೇಕು. ಮುಖ್ಯವಾಗಿ ರಿಯಲ್ ಎಸ್ಟೇಟ್ ಸೆಟಲ್ ಮೆಂಟ್ ಆದರೆ ಕ್ರಮ ತೆಗೆದುಕೊಳ್ತೇನೆ ಎಂದು ಸೂಚನೆ ನೀಡಿದರು.
Karnataka News Live: ಇಂದು ಸಿಎಂ ಸಿದ್ದು ದಿಲ್ಲಿಗೆ । ಸಂಪುಟಕ್ಕೆ ಮೇಜರ್ ಸರ್ಜರಿ? 8 ರಿಂದ 10 ಸಚಿವರಿಗೆ ಕೊಕ್? -
Karnataka News Live: ಕೇರಳ ತೀರದಲ್ಲಿ ಸಿಂಗಾಪುರ ಹಡಗಿಗೆ ಬೆಂಕಿ, 18 ಸಿಬ್ಬಂದಿ ರಕ್ಷಿಸಿದ ಭಾರತೀಯ ನೌಕಾಪಡೆ
ಶ್ರೀಲಂಕಾದಿಂದ ಮುಂಬೈಗೆ ಆಗಮಿಸುತ್ತಿದ್ದ ಸಿಂಗಾಪುರ ಮೂಲದ ಸರಕು ಹಡಗು ಕೇರಳ ತೀರದಲ್ಲಿ ಅಗ್ನಿ ದುರಂತಕ್ಕೆ ಗುರಿಯಾಗಿದೆ. ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾಪಡೆ 22 ಸಿಬ್ಬಂದಿ ಪೈಕಿ 18 ಮಂದಿ ರಕ್ಷಿಸಿದ್ದಾರೆ. ನಾಲ್ಪರು ನಾಪತ್ತೆಯಾಗಿದ್ದಾರೆ.
Karnataka News Live: ಗುಡ್ನ್ಯೂಸ್ ಕೊಟ್ಟ Lakshmi Baramma Serial ನಟಿ ರಶ್ಮಿ ಪ್ರಭಾಕರ್! ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು!
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ನಟಿಸಿದ್ದ ನಟಿ ರಶ್ಮಿ ಪ್ರಭಾಕರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Karnataka News Live: ಶಾಸಕ ಲಕ್ಷ್ಮಣ ಸವದಿ ಸಂಚರಿಸುತ್ತಿದ್ದ ಕಾರು ಅಪಘಾತ, ಪಿಕ್ಅಪ್ ವಾಹನ ಡಿಕ್ಕಿ
ಶಾಸಕ ಲಕ್ಷ್ಮಣ ಸವದಿ ಸಂಚರಿಸುತ್ತಿದ್ದ ಕಾರಿಗೆ ಪಿಕ್ ಅಪ್ ವಾಹನ ಡಿಕ್ಕಿಯಾದ ಘಟನೆ ನಡೆದಿದೆ. ಮುಖಾಮುಖಿ ಡಿಕ್ಕಿಯಿಂದ ಶಾಸಕರ ಕಾರು ಜಖಂಗೊಂಡಿದೆ.
Karnataka News Live: ಭವಿಷ್ಯದಲ್ಲಿ ಭಾರತವು ಜಾಗತಿಕ ಉತ್ಪಾದನಾ ಹಬ್ - ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಭಾರತದಲ್ಲಿ ಉತ್ಪಾದನಾ ವಲಯಕ್ಕೆ ಪೂರಕ ಪರಿಸರ, ಸಂಪನ್ಮೂಲ ಮತ್ತು ಸಶಕ್ತ ಯುವ ಸಮೂಹವಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್ ಆಗಿ ಪರಿವರ್ತನೆ ಹೊಂದಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
Karnataka News Live: ಕಾಲ್ತುಳಿತ ಘಟನೆಯಿಂದ ಸಿಎಂ ಬಹಳ ನೊಂದಿದ್ದಾರೆ - ಸಚಿವ ಡಾ.ಎಂ.ಸಿ.ಸುಧಾಕರ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ, ನಮಗೆಲ್ಲಾ ಬಹಳ ದುಃಖವಾಗಿದೆ. ಮುಖ್ಯಮಂತ್ರಿಗಳಂತೂ ಬಹಳ ನೋವು ತಿಂದಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
Karnataka News Live: ಚಾಮರಾಜನಗರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಗಲಾಟೆಯಿಂದ ಅಡ್ಮಿಷನ್ ಶೂನ್ಯ - ವರದಿ ಬಳಿಕ 12 ವಿದ್ಯಾರ್ಥಿಗಳ ಹಾಜರಿ
ಅದು ಗಡಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ.ಇಬ್ಬರು ಶಿಕ್ಷಕರಿದ್ದರು,ಇವರಿಬ್ಬರ ಕಿತ್ತಾಟಕ್ಕೆ ಬೇಸತ್ತಿದ್ದ ಗ್ರಾಮಸ್ಥರು ಈ ಬಾರಿ ಮಕ್ಕಳನ್ನು ಅಡ್ಮಿಷನ್ ಮಾಡಲೂ ಹಿಂದೇಟು ಹಾಕಿದ್ದರು.
Karnataka News Live: ಭಾರತೀಯ ನೌಕಾಪಡೆ ಪೈಲೆಟ್ ಆಗಿ ಆಯ್ಕೆಯಾದ ಉಡುಪಿಯ ಕುವರಿ ಸೀಮಾ ತೆಂಡೂಲ್ಕರ್
ಉಡುಪಿಯ ಪೆರ್ಣಂಕಿಲ ಗ್ರಾಮದ ಹಳ್ಳಿ ಹುಡುಗಿ ಇದೀಗ ಭಾರತೀಯ ನೌಕಾಪಡೆಯ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಎಂಜಿನಿಯರಿಂಗ್ ಪದವಿ ಪೂರೈಸಿರುವ ಸೀಮಾ ನೌಕಾಪಡೆಯ ಪೈಲೆಟ್ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Karnataka News Live: ಸಿಎಂ ಪಟಲಾಂ ಮಾಡಿದ ತಪ್ಪಿಗೆ ಅಮಾಯಕರ ಜೀವ ಹೋಗಿದೆ - ಕೇಂದ್ರ ಸಚಿವ ಸೋಮಣ್ಣ ಆರೋಪ
ಸಿಎಂ ಪಟಲಾಂ ಮಾಡಿದ ಎಡವಟ್ಟಿನಿಂದ ಅಮಾಯಕರ ಜೀವ ಹೋಗಿದೆ. ಸಿದ್ದರಾಮಯ್ಯ ಅವರಿಂದ ಇಂತಹ ದುರಾಡಳಿತ ನಿರೀಕ್ಷಿಸಿರಲಿಲ್ಲ. ಈಗಲಾದರೂ ಘಟನೆಯ ಹೊಣೆ ಹೊತ್ತುಕೊಳ್ಳಿ ಎಂದು ವಿ.ಸೋಮಣ್ಣ ಆಗ್ರಹಿಸಿದರು.
Karnataka News Live: 9 ಸಾವಿರ ಬೇಕೋ, ನಾನು ಬೇಕೊ? ಆಫರ್ ಕೊಟ್ಟ ಚೆಲುವೆ! ಯುವಕನ ಉತ್ತರಕ್ಕೆ ಶ್ಲಾಘನೆಗಳ ಮಹಾಪೂರ
ವಿದೇಶಿ ಯುವತಿಯೊಬ್ಬಳು 9 ಸಾವಿರ ರೂಪಾಯಿ ಅಥ್ವಾ ತನ್ನ ಜೊತೆ ಡೇಟಿಂಗ್ ಆಫರ್ ಕೊಟ್ಟಾಗ ಈ ಯುವಕ ಮಾಡಿದ್ದೇನು ನೋಡಿ! ಉತ್ತರ ಕೇಳಿ ಸುಸ್ತಾದ ಬೆಡಗಿ
Karnataka News Live: ಅಬ್ಬಬ್ಬಾ... ಮಹಿಳೆಯ ಪಿತ್ತಕೋಶದಿಂದ 861 ಕಲ್ಲು ಹೊರಕ್ಕೆ - ಮೈಸೂರು ವೈದ್ಯರ ಸಾಧನೆ
ನಗರದ ಕಾವೇರಿ ಹಾರ್ಟ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಪಿತ್ತಕೋಶದಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
Karnataka News Live: ಭಾರತೀಯ ಗಗನಯಾತ್ರಿ ಬಾಹ್ಯಾಕಾಶ ಯಾತ್ರೆ Axiom-4 ಉಡಾವಣೆ ದಿಢೀರ್ ರದ್ದು
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕೈಗೊಳ್ಳಬೇಕಿದ್ದ ಬಾಹ್ಯಾಕಾಶ ಯಾತ್ರೆ ದಿಢೀರ್ ರದ್ದಾಗಿದೆ. Axiom-4 ಉಡಾವಣೆ ರದ್ದಾಗಿರುವ ಕುರಿತು ಇಸ್ರೋ ಸ್ಪಷ್ಟಪಡಿಸಿದೆ.
Karnataka News Live: Honeymoon case - ರಿಟರ್ನ್ ಟಿಕೆಟ್ ಮಾಡದೇ ಸುಳಿವು ನೀಡಿದ ಹಂತಕಿ! 'ಬಾ ನಲ್ಲೆ ಮಧುಚಂದ್ರಕೆ' ಪಾರ್ಟ್-2
ಪತಿಯನ್ನು ಹನಿಮೂನ್ಗೆ ಕರೆದೊಯ್ದು ಅಲ್ಲಿಯೇ ಆತನನ್ನು ಮುಗಿಸಿದ ಹಂತಕಿ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾದ ರೀತಿಯಲ್ಲಿಯೇ ಸಿಕ್ಕಿಬಿದ್ದಿದ್ದಾಳೆ! ಏನದು?
Karnataka News Live: ಪಾಡ್ಕಾಸ್ಟ್ನಲ್ಲಿ ವಿಜಯ್ ಮಲ್ಯ ಕಟ್ಟಿದ್ದು ಹ್ಯುಬ್ಲೋಟ್ ವಾಚ್, ಇದರ ಬೆಲೆ ಎಷ್ಟು ಗೊತ್ತಾ?
ಉದ್ಯಮಿ ವಿಜಯ್ ಮಲ್ಯ ಆಸ್ತಿಗಳೆಲ್ಲವು ಮುಟ್ಟುಗೋಲಾಗಿದೆ. ವಿದೇಶಗಳಲ್ಲಿರುವ ಉದ್ಯಮಗಳಿಂದ ಕೋರ್ಟ್, ಕೇಸ್ ನಡೆಸುತ್ತಿದ್ದಾರೆ. ಆದರೆ ಪಾಡ್ಕಾಸ್ಟ್ನಲ್ಲಿ ವಿಜಯ್ ಮಲ್ಯ ಕಟ್ಟಿದ ವಾಚ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕಾರಣ ಇದು ಲಿಮಿಟೆಡ್ ಎಡಿಶನ್ ಹ್ಯುಬ್ಲೋಟ್ ವಾಚ್, ಇದರ ಬೆಲೆ ಎಷ್ಟು ಗೊತ್ತಾ?
Karnataka News Live: ಮೆಟಾದಲ್ಲಿ ಕೋಟಿ ಸಂಬಳ ಪಡೆಯುತ್ತಿದ್ದ ವ್ಯಕ್ತಿ ಈಗ ಫುಡ್ ಡೆಲಿವರಿ ಬಾಯ್!
Karnataka News Live: ದಿನಕ್ಕೆ 7000 ಹೆಜ್ಜೆ ನಡಿಗೆ - ತೂಕ ಇಳಿಕೆ, ಶುಗರ್ ನಿಯಂತ್ರಣಕ್ಕೆ ಸೂಪರ್
ದಿನಾ 7,000 ಹೆಜ್ಜೆ ನಡೆಯೋದ್ರಿಂದ ಆಗೋ ಅದ್ಭುತ ಬದಲಾವಣೆಗಳ ಬಗ್ಗೆ ತಿಳ್ಕೊಳ್ಳಿ.
Karnataka News Live: ದಿನ 3ಜಿಬಿ ಡೇಟಾ, ಜಿಯೋಹಾಟ್ಸ್ಟಾರ್ ಸೇರಿ 17 ಒಟಿಟಿ ಉಚಿತ, ವಿಐ -ವಿವೋ V50e ಜಂಟಿ ಆಫರ್
ಪ್ರತಿ ದಿನ 3 ಜಿಬಿ ಡೇಟಾ ಉಚಿತ, ಜಿಯೋಹಾಟ್ಸ್ಟಾರ್ ಸೇರಿ 17 ಒಟಿಟಿ ಉಚಿತ, 350 ಲೈವ್ ಟಿವಿ ಸಬ್ಸ್ಕ್ರಿಪ್ಶನ್, ಅನ್ಲಿಮಿಟೆಡ್ ಕಾಲ್, 100 ಎಸ್ಎಂಎಸ್ ಸೇರಿದಂತೆ ಹಲವು ಆಫರ್ ಘೋಷಣೆಯಾಗಿದೆ. ಇದು ವಿವೋ V50e ಹಾಗೂ ವಿಐ ಜಂಟಿಯಾಗಿ ಘೋಷಿಸಿದ ಆಫರ್
Karnataka News Live: ಅಪ್ರಾಪ್ತ ವಿದ್ಯಾರ್ಥಿ ಜೊತೆ ಕ್ಲಾಸ್ರೂಮ್ನಲ್ಲೇ ಸೆ*ಕ್ಸ್, ಶಿಕ್ಷಕಿ ಅರೆಸ್ಟ್!
Karnataka News Live: ಕರ್ನಾಟಕದಲ್ಲಿ ಇದೇ ಮೊದಲು, ಮಂಗಳೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ, ಬಳಸಿದ ಕಸವೆಷ್ಟು?
ಮಂಗಳೂರಿನಲ್ಲಿ 1.70ಲಕ್ಷ ಕಿಲೋಗ್ರಾಂ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಪ್ಲಾಸ್ಟಿಕ್ ಅನ್ನು ನಾಲ್ಕು MRF ಘಟಕಗಳಿಂದ ಸಂಗ್ರಹಿಸಿ, ತಲಪಾಡಿ–ನಂತೂರು ಮತ್ತು ಸುರತ್ಕಲ್–ಸಾಸ್ತಾನ ನಡುವಿನ ಸೇವಾ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ.
Karnataka News Live: ಬಿಜೆಪಿ, ಮೋದಿಯಿಂದ ದೇಶ ಒಗ್ಗಟ್ಟಾಗಿಲ್ಲ - ಸಚಿವ ಎಚ್.ಸಿ.ಮಹದೇವಪ್ಪ
ಬಿಜೆಪಿ, ಮೋದಿಯಿಂದ ದೇಶ ಒಗ್ಗಟ್ಟಾಗಿಲ್ಲ. ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ದೇಶ ಒಗ್ಗಟ್ಟಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.