Kannada Entertainment Live: ಬುರ್ಜ್ ಖಲೀಫಾದಲ್ಲಿ ಫ್ಲಾಟ್ ಖರೀದಿಸಿ ಏಕೈಕ ಭಾರತೀಯ ನಟ; ಬೆಲೆ ಎಷ್ಟು?
Jun 10 2025, 08:10 AM ISTಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದು 1 ವರ್ಷ ಪೂರ್ಣವಾಯಿತು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಮೇಲೆ ಈ ಕೊಲೆಯ ಆರೋಪ ಕೇಳಿ ಬಂತು. ದರ್ಶನ್ 6 ತಿಂಗಳು ಜೈಲುವಾಸ ಅನುಭವಿಸಿ ಸದ್ಯ ಬೇಲ್ ಮೇಲೆ ಹೊರಗಿದ್ದಾರೆ. ಇನ್ನೇನು ಶೂಟಿಂಗ್ಗಾಗಿ ವಿದೇಶಕ್ಕೆ ಹಾರೋದಕ್ಕೂ ಸಜ್ಜಾಗಿದ್ದಾರೆ. ಇತ್ತ ರೇಣುಕಾಸ್ವಾಮಿ ಕುಟುಂಬ ಮಾತ್ರ ನ್ಯಾಯಕ್ಕಾಗಿ ಕಾಯುತ್ತಲಿದೆ. ಒಂದು ವರ್ಷ ಕಳೀತು.. ಇನ್ನೆಷ್ಟು ವರ್ಷ ಬೇಕು ಅಂತ ಪ್ರಶ್ನೆ ಮಾಡುತ್ತಿದೆ.ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಯ್ತು. ಜೂನ್ 9 , 2024ರಂದು ಬೆಂಗಳೂರಿನ ಸುಮನಹಳ್ಳಿ ಮೋರಿ ಬಳಿಕ ರೇಣುಕಾಸ್ವಾಮಿಯ ಬಾಡಿ ಪತ್ತೆಯಾಗಿತ್ತು. ಹತ್ತಿರದ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಅನಾಥ ಶವ ಬಿದ್ದಿದೆ ಅಂತ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಜೂನ್ 10ನೇ ತಾರೀಖು ಕಾರ್ತಿಕ್, ನಿಖಿಲ್ ಮತ್ತು ಕೇಶವ ಮೂರ್ತಿ ಅನ್ನೋ ಮೂವರು ಬಂದು ಪೊಲೀಸರ ಎದುರು ನಾವೇ ಕೊಲೆ ಮಾಡಿದ್ದೀವಿ ಅಂತ ಸರೆಂಡರ್ ಆಗಿದ್ರು. ಆದರೆ, ಅವ್ರಿಗೆ ಪೊಲೀಸರು ಟ್ರೀಟ್ಮೆಂಟ್ ಕೊಟ್ಟಾಗಲೇ ಹೊರಬಂದಿದ್ದು ನಟ ದರ್ಶನ್ ಹೆಸರು.