ಪುಲ್ವಾಮಾದಲ್ಲಿ ಭೀಕರ ಉಗ್ರರ ದಾಳಿ ನಡೆದು 44 ಯೋಧರು ಹುತಾತ್ಮರಾದ ಬೆನ್ನಲ್ಲೇ ಬಾಲಿವುಡ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಾಲಿವುಡ್ ನಲ್ಲಿ ಪಾಕ್ ಕಲಾವಿದರಿಗೆ ನಿಷೇಧ ಹೇರಲಾಗಿದೆ.
ಗಂಡುಗಲಿ ಮದಕರಿ ನಾಯಕ ಕನ್ನಡದ ಬಹು ದೊಡ್ಡ ಸಿನಿಮಾ. ಈ ಸಿನಿಮಾಗೆ ತಯಾರಿ ಶುರುವಾಗುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಹೊರ ಬಿದ್ದಿದೆ. ವೀರಾವೇಶದ ಓ ಪೋಸ್ಟರ್ ಚಿತ್ರದ ಬಗ್ಗೆ ಸೆಳೆತ ಮೂಡಿಸಿದೆ. ಈ ಚಿತ್ರ 2D ಅಥವಾ 3d ಯಲ್ಲಿ ಮೂಡಿ ಬರುತ್ತಿಲ್ಲ. ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಹಂಸಲೇಖ ಸಂಗೀತ ನೀಡಿದ್ದಾರೆ.
ರೆಬೆಲ್ಸ್ಟಾರ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರನ್ನೂ ಒಂದೇ ರೀತಿ, ಪ್ರೀತಿ-ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರಿಂದ ಸರ್ವರಿಗೂ ಆಪ್ತರಾದವರು ಅಂಬಿ. ಇಂಥ ಅಂಬಿ ಪ್ರೇಮ್ ಬಳಿ ಒಂದು ಕೋರಿಕೆಯನ್ನು ಇಟ್ಟಿದ್ದರಂತೆ. ಏನದು?
ಯುವ ಪ್ರತಿಭೆಗಳು ಸೇರಿಕೊಂಡು ಸಿದ್ಧಪಡಿಸುತ್ತಿರುವ ಸಿನಿಮಾ ಫೇಸ್ 2 ಫೇಸ್. ಇದೊಂದು ಥ್ರಿಲ್ಲರ್ ಫ್ರೇಮ ಕಥೆ ಹೊಂದಿರುವ ಸಿನಿಮಾ. ಇದು ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ.
ಹಾಡುಗಳ ವಿಚಾರದಲ್ಲಿ ‘ಪಡ್ಡೆಹುಲಿ’ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಪ್ರೇಮಿಗಳ ದಿನಕ್ಕೊಂದು ಹಾಡು, ಹೀರೋ ಎಂಟ್ರಿಗೊಂದು ಹಾಡು, ಚಿತ್ರದುರ್ಗ ಹಾಗೂ ಕನ್ನಡ ಭಾಷೆ ಮತ್ತು ವಿಷ್ಣುವರ್ಧನ್ ಅವರನ್ನು ನೆನಪಿಸುವ ಹಾಡುಗಳ ನಂತರ ಈಗ ಬಿ ಆರ್ ಲಕ್ಷ್ಮಣ್ ರಾವ್ ಹಾಡು ಸದ್ದು ಮಾಡುತ್ತಿದೆ
ಕನ್ನಡ ಪ್ರಭ ಸಿನಿವಾರ್ತೆ ಕಿರುತೆರೆ ನಟಿ ಅರ್ಚನಾ ಜೋಯಿಸ್ ಬ್ಲಾಕ್ ಬಸ್ಟರ್ ‘ಕೆಜಿಎಫ್’ಚಿತ್ರದಲ್ಲಿನ ತಾಯಿ ಪಾತ್ರದೊಂದಿಗೆ ಮನೆ ಮಾತಾದದ್ದು ಹಳೆಯ ಕತೆ. ಆ ಪಾತ್ರದ ಅಭಿನಯ ಹಾಗೂ ಜನಪ್ರಿಯತೆ ಅವರಿಗೆ ಮತ್ತಷ್ಟು ಅವಕಾಶಗಳನ್ನು ತೆರೆದಿದೆ. ಅವರೀಗ ‘ವಿಜಯರಥ’ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಅಂದಹಾಗೆ, ಅವರು ಈ ಚಿತ್ರ ಒಪ್ಪಿಕೊಂಡದ್ದು ಕೆಜಿಎಫ್ ಬಿಡುಗಡೆಗೂ ಮೊದಲೇ. ತಮ್ಮ ಪಾತ್ರದ ಬಗ್ಗೆ ಅವರೇನು ಅನ್ನುತ್ತಾರೆ ಕೇಳಿ:
ಜೇಕಬ್ ವರ್ಗೀಸ್ ಹಾಗೂ ನೀನಾಸಂ ಸತೀಶ್ ಕಾಂಬಿನೇಷನ್ ‘ಚಂಬಲ್’ ಸಿನಿಮಾ ಫೆ.22ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಅದರ ಕುರಿತು ಸತೀಶ್ ಮಾತಾಡಿದ್ದಾರೆ.
ಮಂಡ್ಯದ ವೀರ ಯೋಧ ಗುರು ಅವರ ಮನೆಗೆ ಬೆಲ್ ಬಾಟಮ್ ಚಿತ್ರ ತಂಡ ಭೇಟಿ ನೀಡಿತ್ತು. ಯೋಧನ ಮನೆಯವರ ಸ್ಥಿತಿ ಕಂಡು ನಟಿ ಹರಿಪ್ರಿಯಾ ಕಣ್ಣೀರಾದರು.
ಮಾಧ್ಯಮಗಳ ಮೇಲೆ ರಕ್ಷಿತಾ ಪ್ರೇಮ್ ಗರಂ | ಪ್ರೇಮ್ ಚಿತ್ರದ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳ ಮೇಲೆ ಮುನಿಸಿಕೊಂಡ ರಕ್ಷಿತಾ |
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ದು ಗದ್ದಲವಿಲ್ಲದೇ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ. ಎಂದಿಗಿಂತ ಹೆಚ್ಚು ಅರ್ಥಪೂರ್ಣವಾಗಿ ಸೆಲಬ್ರೇಟ್ ಮಾಡಿದ್ದಾರೆ. ಅಭಿಮಾನಿಗಳು ಬರ್ತಡೇ ಉಡುಗೊರೆಯಾಗಿ ದವಸ, ಧಾನ್ಯಗಳನ್ನು ನೀಡಿದ್ದಾರೆ. ಇವೆಲ್ಲವೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ನೀಡುವುದಾಗಿ ಹೇಳಿದ್ದಾರೆ.