ಇಡೀ ಚಿತ್ರವನ್ನು ತನ್ನ ಸೊಗಸಾದ ನಟನೆಯಿಂದ ಹೊತ್ತು ಸಾಗಿರುವುದು ವಿರಾಟ್. ಚಿತ್ರದ ಪೂರ್ತಿ ಆವರಿಸಿಕೊಂಡಿರುವ ಅವರು ತನ್ನ ನಟನೆಯಿಂದ, ಸ್ಟೈಲ್ನಿಂದ ಮನಸ್ಸು ಗೆಲ್ಲುತ್ತಾರೆ. ಸೂಕ್ತ ಕತೆ ಸಿಕ್ಕರೆ ದೊಡ್ಡದಾಗಿ ಬೆಳೆಯುವ ಸೂಚನೆ ಕೊಡುತ್ತಾರೆ.
ವೇದ್ನ ಪತ್ನಿ ಮೀರಾ ಕಾಣೆಯಾಗುತ್ತಾಳೆ ಮತ್ತು ನಂತರ ಪತ್ತೆಯಾದಾಗ, ವೇದ್ ಅವಳನ್ನು ತನ್ನ ಪತ್ನಿ ಎಂದು ಗುರುತಿಸಲು ನಿರಾಕರಿಸುತ್ತಾನೆ. ಮೀರಾಳಂತೆ ಕಾಣುವ ಮಹಿಳೆಯನ್ನು ಕುಟುಂಬದ ಇತರ ಸದಸ್ಯರು ಗುರುತಿಸಿದರೂ, ವೇದ್ ಮಾತ್ರ ಅವಳು ನಕಲಿ ಎಂದು ಒತ್ತಾಯಿಸುತ್ತಾನೆ. ಈ ರಹಸ್ಯದ ಹಿಂದಿನ ಸತ್ಯವೇನು?
ಕೇವಲ ₹37 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾ ₹200 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕಲಾವಿದರ ಅದ್ಭುತ ನಟನೆ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ಚಿತ್ರದ ಎಲ್ಲಾ ಹಾಡುಗಳು ಸಹ ಸಿನಿಮಾ ಯಶಸ್ಸಿಗೆ ಕಾರಣವಾಗಿವೆ.
ಇಷ್ಟು ದಿನ ಸೈಲೆಂಟ್ ಆಗಿ ಸಾಧನೆ ಮಾಡುತ್ತಾ ಬಂದಿರುವ ನಿರ್ದೇಶಕ ಅನಿಲ್ ರವಿಪುಡಿ ಇದೀಗ, ಒಂದು ಅಪರೂಪದ ದಾಖಲೆಗಳನ್ನು ಬರೆದು ತೆಲುಗು ಸ್ಟಾರ್ ನಿರ್ದೇಶಕ ರಾಜಮೌಳಿಗೇ ಸವಾಲ್ ಹಾಕುತ್ತಿದ್ದಾರೆ. ಅನಿಲ್ ರವಿಪುಡಿ ಈವರೆಗೆ ಸಾಧಿಸಿದ್ದಾದರೂ ಏನು ನೀವೇ ನೋಡಿ..
ಒಂದು ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸಲು ನಾಯಕ ಹೊರಡುತ್ತಾನೆ. ಆಗ ಅವನು ಎದುರಿಸುವ ಚಿತ್ರ ವಿತ್ರ ತಿರುವುಗಳೇ ಈ ಕತೆಯ ಹಂದರ. ಅವನೊಂದು ಭಾವಿಸುವಷ್ಟರಲ್ಲಿ ವಿಧಿ ಮತ್ತೊಂದು ತೀರ್ಮಾನ ತೆಗೆದುಕೊಂಡಿರುತ್ತದೆ.
ಅವಳು ಬಹುದೊಡ್ಡ ಉದ್ಯಮಿಯ ಮುದ್ದಿನ ಮಗಳು ಗೀತಾ. ಬೀದಿ ಬದಿ ಸೀರೆ ಮಾರುವ, ಸೀರೆ ನೂಲುವ, ಎರಡು ಇಡ್ಲಿ ತಿಂದು ಮತ್ತೆ ಎರಡು ಇಡ್ಲಿ ದಾನ ಮಾಡುವ ಸಿಕ್ಕಾಪಟ್ಟೆ ಒಳ್ಳೆ ಹುಡುಗ ಸಂಜು ಮೇಲೆ ಮೊದಲ ನೋಟದಲ್ಲೇ ಅವಳಿಗೆ ಲವ್ವಾಗುತ್ತೆ.
ಭಾರತದ ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿ ಭಾರತದ ಪ್ರಜಾಪ್ರಭುತ್ವದ ಮೇಲಾದ ಪರಿಣಾಮ, ರಾಜಕೀಯ ಘಟನೆಗಳು ಮತ್ತು ಅಧಿಕಾರದ ಕಷ್ಟಗಳನ್ನು 'ಎಮರ್ಜೆನ್ಸಿ' ಚಿತ್ರ ತೋರಿಸುತ್ತದೆ. ಕಂಗನಾ ರನೌತ್ ಅವರ ಅಭಿನಯ ಮತ್ತು ನಿರ್ದೇಶನ ಚಿತ್ರಕ್ಕೆ ವಿಶೇಷ ಮೆರಗು ನೀಡಿದೆ.
ಸುಂದರ್ ಸಿ ನಿರ್ದೇಶನದ, ವಿಶಾಲ್ ಅಭಿನಯದ ಮದಗಜರಾಜ ಚಿತ್ರವು ರಜನಿಕಾಂತ್ ಅವರ ಲಾಲ್ ಸಲಾಮ್ ಚಿತ್ರದ ಜೀವಿತಾವಧಿಯ ಗಳಿಕೆಯ ದಾಖಲೆಯನ್ನು ಕೇವಲ 4 ದಿನಗಳಲ್ಲಿ ಮುರಿದಿದೆ.
2021ರ ಸಿನಿಮಾದ ಮುಂದುವರಿದ ಭಾಗ 2024ರಲ್ಲಿ ಬಿಡುಗಡೆಯಾಗಿದ್ದು, ಪ್ರತಿ ಕ್ಷಣವೂ ರೋಚಕ ತಿರುವುಗಳಿಂದ ತುಂಬಿದೆ.ಈ ಚಿತ್ರ, ತ್ರಿಕೋನ ಪ್ರೇಮಕಥೆ, ಪೊಲೀಸ್ ತನಿಖೆ ಮತ್ತು ಹೊಸ ಸಸ್ಪೆನ್ಸ್ಗಳನ್ನು ಒಳಗೊಂಡಿದೆ.
ಬಾಲಿವುಡ್ ನಟ ವರುಣ್ ಧವನ್ ಅವರ ಹಳೆಯ ವಿಡಿಯೋವೊಂದು ಲೀಕ್ ಆಗಿದೆ. ಈ ವಿಡಿಯೋ 'ಮೈ ತೇರಾ ಹೀರೋ' ಚಿತ್ರದ ಶೂಟಿಂಗ್ ವೇಳೆ ನಡೆದಿದ್ದು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವರುಣ್ ಧವನ್ ಟ್ರೋಲ್ ಆಗುತ್ತಿದ್ದಾರೆ.